Monday, May 10, 2010

ಇಂದಿನ ವಿಶೇಷ--- ಮೇ 10


ಡಾ||ಚಿದಾನಂದ ಮೊರ್ತಿ -- ಹುಟ್ಟು ಹಬ್ಬ

""ಸಂಶೋಧನೆಯ ಸಂಶೋಧಕ"" ,""ಕನ್ನಡ ಜಂಗಮ"" ,""ಒಂಟಿ ಸಲಗ"" ಎಂಬ ಬಿರುದಾಂಕಿತರಾಗಿ,ಕನ್ನಡ ಭಾಷೆ ,ನೆಲ,ಜಲದ ಬಗ್ಗೆ ಹತ್ತು ಹಲವು ಹೋರಾಟಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ,ಸದಾ ಕನ್ನಡಿಗರನ್ನು ತಮ್ಮ ಅಸ್ಥಿತ್ವದ ಬಗ್ಗೆ ಎಚ್ಚೆತ್ತುಕೊಳ್ಳುವಂತೆ ಜಾಗೃತಿ ಮೊಡಿಸುತ್ತಿರುವ ,ಅಭಿಮಾನಿಗಳಿಂದ ಪ್ರೀತಿಯಿಂದ "" ಚಿಮೊ"" ಎಂದೆ ಕರೆಯಲ್ಪಡುವ "" ಚಿದಾನಂದ ಮೊರ್ತಿ"" ಯವರಿಗೆ ಇಂದು ಎಂಭತ್ತರ ಸಂಭ್ರಮ.1931ರ ಮೇ 10 ರಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹಿರೇಕೊಗಲೂರು ಎಂಬ ಗ್ರಾಮದಲ್ಲಿ ಜನನ.

""ಸಂಶೋಧನೆ ನನ್ನ ಮೂದಲನೆ ಪ್ರೇಮ,ಚಳುವಳಿ ನನ್ನ ಎರಡನೇ ಪ್ರೇಮ ಮತ್ತು ಕೊನೆಯ ವ್ಯಾಮೋಹ,ನನ್ನ ಮಟ್ಟಿಗೆ ಸಂಶೋಧನೆ ಮತ್ತು ಚಳುವಳೆಗಳೆರಡೂ ಪರಸ್ಪರ ವಿರೋಧವಾದುದೇನೂ ಅಲ್ಲ,ಎರಡರ ಮುಂದಿರುವುದು ಕರ್ನಾಟಕವೇ,ಸತ್ಯವನ್ನು ಕಾಣಲು ,ನನ್ನನ್ನು ನಾನು ತಿಳಿಯಲು ಎರಡು ಬೇರೆ ಬೇರೆ ಮಾರ್ಗಗಳು ಮಾತ್ರ"" ಅನ್ನುವ ಚಿಮೊ ಅವರು ತಮ್ಮದೇ ಶೈಲಿಯಲ್ಲಿ ಕನ್ನಡ ಪರ ಹೋರಾಟವನ್ನು ನಿರ್ದೇಶಿಸುತಿದ್ದರು.
ಸರೋಜಿನಿ ಮಹಿಷಿ ವರದಿ,ಕನ್ನಡ ಅಭಿವೃದ್ಧಿ ಪ್ರಾಧಿಕಾರ,ಸಿ ವರ್ಗದ ಹುದ್ದೆಗೆ ಕನ್ನಡ ಕಡ್ಡಾಯ,ಕನ್ನಡ ನಾಮಫಲಕ ಆಜ್ನೆ,ಉರ್ದು ವಾರ್ತೆ ವಿರೋಧ,ಕಾವೇರೆ ಜಲವಿವಾದ,ಗೋಕಾಕ ಚಳುವಳಿ,ಬೆಳಗಾವಿ ಸಂಬಂಧ ಹೋರಾಟ ಸಹಿತ ಅನೇಕಾನೇಕ ಅವರ ಹೆಜ್ಜೆಗುರುತುಗಳು ಬೃಹದಾಕಾರವಾಗಿ ಮೊಡಿದೆ.

ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ,ಶೂನ್ಯ ಸಂಪಾದನೆ ಕುರಿತು,ಸಂಶೋಧನಾ ತರಂಗ,ಸಂಶೋಧನೆ,ಗ್ರಾಮೀಣ ಅಧ್ಯಯನ,ವಾಗರ್ಥ ಇನ್ನು ಹಲವಾರು ಕೃತಿಗಳು ಇವರ ಲೇಖನದಿಂದ ಚಿಮ್ಮಿರುವ ಕಾರಂಜಿಗಳು.
ಸರ್ಕಾರ,ಸಂಘ ಸಂಸ್ಥೆಗಳು ಇವರಿಗೆ ವಿವಿಧ ರೀತಿಯ ಪ್ರಶಸ್ತಿ ಪಾರಿತೋಷಕಗಳನ್ನಿತ್ತು ಗೌರವಿಸಿದೆ. ಪಂಪ ಪ್ರಶಸ್ತಿ ,ನಾಡೋಜ ಪ್ರಶಸ್ತಿ, ಅ.ನ.ಕೃ. ಪ್ರಶಸ್ತಿ,ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಭಾಜನರಾಗಿರುವ ಚಿಮೊ ಭವಿಷ್ಯದಲ್ಲಿ ಇನ್ನು ಹೆಚ್ಚು ಹೆಚ್ಚು ಸಂಶೋಧನೆ ನೆಡಸಲಿ,ಹೋರಾಟದ ಮುಂದಾಳತ್ವ ವಹಿಸಲಿ ,ನೂರ್ ಕಾಲ ಬಾಳಲಿ ಎಂದು ಅವರ ಜನ್ಮದಿನದಂದು ಶುಭಾಶಯವನ್ನು ಕೋರೋಣ,

0 comments:

Post a Comment