Sunday, May 9, 2010

ಇಂದಿನ ವಿಶೇಷ--- ಮೇ ೯



ಮೇ ೯ ,
ಹುಟ್ಟು ಸೇನಾನಿ, ಕ್ರಾಂತಿಕಾರಿ ಸಾಹಿತಿ, ಕನ್ನಡ ಕಾದಂಬರಿ ಪ್ರವರ್ತಕ, ಹಲವು ಕಾಳಗಗಳ ಕಲಿ ಹೀಗೆ ಹಲವು ಬಿರುದಾಂಕಿತರಾಗಿ, ಒಟ್ಟು ಕನ್ನಡ ಸಂಸ್ಕೃತಿಯ ಪ್ರಚಾರಕರಾಗಿದ್ದ "ಅನಕೃ" ಅವರ ಜನ್ಮದಿನ.ಕಾದಂಬರಿ, ಸಣ್ಣಕಥೆ, ನಾಟಕ, ಪತ್ರಿಕೋದ್ಯಮ, ಕಾವ್ಯ, ಸಂಗೀತ, ಚಲನಚಿತ್ರ ಹೀಗೆ ಎಲ್ಲಾ ಪ್ರಕಾರಗಳಲ್ಲಿಯು ತಮ್ಮದೇ ಆದ ಛಾಪನ್ನು ಮೊಡಿಸಿದ ಅಪ್ಪಟ ಕನ್ನಡಿಗರೆನಿಸಿಕೊಂಡರಲ್ಲಿ ಅಗ್ರ ಸಾಲಿನಲ್ಲಿ ನಿಲ್ಲುವ ಮೇಧಾವಿ.
ಒಮ್ಮೆ ಒಂದು ತುಂಬು ಸಭಾಂಗಣದಲ್ಲಿ "ಕನ್ನಡದ ಆಸ್ತಿ" ಮಾಸ್ತಿ ವೆಂಕಟೇಶ ಅಯ್ಯಂಗಾರ್ ರವರು ಸಭಿಕರಿಗೆ ಅನಕೃ ಅವರನ್ನು ಪರಿಚಯ ಮಾಡಿಸಿಕೊಟ್ಟ ಪರಿ ಹೀಗಿತ್ತು. """ ನಾನು ತಮಿಳ್ ಕನ್ನಡಿಗ,ಸರ್ ಮಿರ್ಜಾ ಇಸ್ಮಾಯಿಲ್ ಮುಸ್ಲಿಮ್ ಕನ್ನಡಿಗ,ಅನಕೃ ಅಪ್ಪಟ ಕನ್ನಡಿಗ """,, ಕನ್ನಡದ ಮೇರು ಸಾಹಿತ್ಯಗಾರ,ಅತ್ಯುನ್ನತ ಙ್ನನಪೀಠ ಪ್ರಶಸ್ತಿ ವಿಜೇತರೊಬ್ಬರು ಇನ್ನೋರ್ವ ಸಾಹಿತಿಯನ್ನು ಈ ರೀತಿಯ ವಾಕ್ಯಗಳಲ್ಲಿ ಬಣ್ಣಿಸಿದಾಗ ಅನಕೃರವರಿಗೆ ಕನ್ನಡ ಭಾಷೆಯ ಮೇಲಿನ ಪ್ರೀತಿ,ಅಭಿಮಾನ,ಭಕ್ತಿಯ ಆಳದ ಅರಿವಾಗುತ್ತದೆ.

ಅನಕೃ ಅವರ ಪೂರ್ಣ ಹೆಸರು "'ಅರಕಲಗೂಡು ನರಸಿಂಗರಾವ್ ಕೃಷ್ಣರಾವ್"" ,ಇಂದಿಗೆ ಸರಿಯಾಗಿ ೧೦೨ ವರ್ಷಗಳ ಹಿಂದೆ ಮೇ ೯ ರಂದು ಕೋಲಾರದಲ್ಲಿ ಜನಿಸಿದರು,ಕನ್ನಡದ ಸಾಹಿತ್ಯ ಕೃಷಿಯಲ್ಲಿ ನೇರ ನುಡಿ,ಕಟು ಸತ್ಯದಂತಹ ಕೃತಿಗಳಿಗೆ ನಾಂದಿ ಹಾಡಿದವರು, ಕರ್ನಾಟಕ ಏಕೀಕರಣದ ಹೋರಾಟದಲ್ಲಿ ನಾಯಕತ್ವ ವಹಿಸಿದರು.
ಸಾಹಿತ್ಯ ಮತ್ತು ಕಾಮಪ್ರಚೋದನೆ,ಕಾಮನಬಿಲ್ಲು,ಸಂಧ್ಯಾರಾಗ,ನಟಸಾರ್ವಭೌಮ,ಬಣ್ಣದ ಬೀಸಣಿಗೆ,ರಾಜ ನರ್ತಕಿ,ನನ್ನನ್ನು ನಾನೆ ಕಂಡೆ, ಅನಕೃ ರವರ ಲೇಖನದಿಂದ ಹೊರಬಂದ ಹಲವಾರು ಕೃತಿಗಳಲ್ಲಿ ಕೆಲ ಉದಾಹರಣೆಗಳು.ಮಣಿಪಾಲ್ ನಲ್ಲಿ ನಡೆದ ೪೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
೧೯೭೧ ಜುಲೈ ೮ ರಂದು ಇಹಲೋಕ ತ್ಯಜಿಸಿದ "ಅಪ್ಪಟ ಕನ್ನಡಿಗ" ಕನ್ನಡವನ್ನೇ ಉಸಿರಾಗಿಸಿಕೊಂಡು ಬದುಕುತ್ತಿರುವ ಕೋಟ್ಯಾಂತರ ಕನ್ನಡಿಗರ ಮನದಲ್ಲಿ ಸದಾ ಚಿರಸ್ಥಾಯಿ.

0 comments:

Post a Comment