
ಶನಿವಾರದ ಮುಂಜಾನೆಯ ಮುಸುಕಿನಲಿ ಹತ್ತಾರು ಕನಸು ಹೊತ್ತು ಸಾವಿರಾರು ಮೈಲುಗಳ ದೂರದಿಂದ ಹಾರಿದ್ದ ಭಾರತೀಯರಿಗೆ ತಮ್ಮ ಜೀವನದಲ್ಲಿ ಇನ್ನೆಂದು ಬೆಳಕು ಹರಿಯುವುದಿಲ್ಲ ಎಂಬ ಸತ್ಯವನ್ನು ಆ ದೇವರು ಬೆಳಿಗ್ಗೆ 6.30 ತನಕ ಮುಚ್ಚಿಟ್ಟಿದ್ದನು,ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನ ಮೂಲಕ ತಾಯ್ನಾಡಿಗೆ ಸ್ಪರ್ಶಿಸಲಿ ಎಂದೇ ಕಾಯುತ್ತಿದ್ದ ಸಾವು ವಿಮಾನದ ಚಕ್ರದ ರೂಪದಲ್ಲಿ ಯಮಪಾಶ ಬೀಸಿ 158 ಜನರನ್ನು ಸುಟ್ಟು ಕರಕಲಾಗಿಸಿ ಉಳಿಸಿದ್ದು ಕರ್ನಾಟಕದ ಇತಿಹಾಸದಲ್ಲಿ ಹಿಂದೆಂದೂ ಕೇಳರಿಯದ ಭಯಾನಕ ಮಾರಣ ಹೋಮ.
ಹುಟ್ಟಿದವನಿಗೆ ಸಾವು ಖಚಿತ ಆದರೆ ಹುಟ್ಟಿದಾಕ್ಷಣ ಸಾವೇ,,,,,,,,,,,ದೇವರು ಇಷ್ಟೊಂದು ಕ್ರೂರಿ ಆದನೇ,,,,,,,??
ಇನ್ನೆಂದೂ ಹೀಗಾಗದಿರಲೆಂದು ಪ್ರಾರ್ಥಿಸೋಣ........ಮಡಿದವರ ಆತ್ಮಕ್ಕೆ ಶಾಂತಿ ಸಿಗಲಿ....!!
0 comments:
Post a Comment